Wednesday, July 29, 2015

ಮರೆಯಾದ ಮಾಣಿಕ್ಯ!!

Dr. A P J Abdul kalam sir! Rip
ದೇಶ ಕಂಡ ದಿವ್ಯ ಚೇತನ
ಭರತ ಭೂಮಿಯ ಹೆಮ್ಮೆಯ ಮಗನ
ಪಾದ ಪದ್ಮಗಳಿಗೆ ಇದೋ ಶತಕೋಟಿ ನಮನ
ಮನ ಬಯಸುತಿದೆ ಅರ್ಪಿಸಲು ನಿಮಗಾಗಿ ಈ ಕವನ!!
ನಾ ಕಂಡ ಸ್ಪೂರ್ತಿ ದೀವಿಗೆ
ನಾ ಮೆಚ್ಚಿದ ವ್ಯಕ್ತಿತ್ವ ಈ ಬಾಳಿಗೆ
ಎಲ್ಲರ ಬದುಕಿಗೆ ಮುನ್ನುಡಿ ನೀವು
ಸದ್ದಿಲ್ಲದೆ ಕರೆದೊಯ್ಯಿತು ಸಾವು!!
ಮಿಡಿಯುತಿಹುದು ಭಾರತೀಯರ ಮನವು
ಒದ್ದಾಡುತಿಹುದು ದುಃಖದಲಿ ತಾಯಿ ನೆಲವು!
ಕಾಣದ ಲೋಕಕ್ಕೆ ಸದ್ದಿಲ್ಲದ ಪಯಣ
ಉಳಿಸಿ ಹೋದ ನೆನಪುಗಳ ತಲ್ಲಣ!!
ಮರೆಯಲಾಗದು ಅಗಲಿದ ಈ ದಿನ
ಭಾರತ ಪಟ್ಟ ನಷ್ಟದ ಕರಾಳ ದಿನ!
ನೀಡಲಿ ಭಗವಂತ ಶಾಂತಿ ನಿಮ್ಮ ಆತ್ಮಕ್ಕೆ!
ಮತ್ತೆ ಹುಟ್ಟಿ ಬನ್ನಿ ,ವರವಾಗಿ ಈ ವಿಶ್ವಕ್ಕೆ!!!!
ಕಲಾಂ ನಿಮಗೊಂದು ಸಲಾಂ!!!
ಇಂತೀ ನಿಮ್ಮ
ಅಶು!!!!

Tuesday, July 14, 2015

ಕೊನೆಯ ಪುಟ!!!!!!!

ಕಾರ್ಮೋಡ ಕವಿದು ಮರೆಯಾದ ಸೂರ್ಯ ಮುಗುಳ್ನಕ್ಕಂತೆ!!!
ಕಲ್ಲಾದ ಹೂವು ಮತ್ತೆ ಪರಿಮಳ ಚಿಮ್ಮಿದಂತೆ!!
ನನ್ನ ನಾ ಕಳೆದುಕೊಳ್ಳುವ ಸೂಚನೆಯಂತೆ!
ಭಯ ಹೊತ್ತು ತರುತಿದೆ ಜೀವನದ ಸಂತೆ!!!!
ಅನುಭವಗಳ ಕಾಲ್ನಡಿಗೆಯಲ್ಲಿ ಕಳ್ಳು ಮುಳ್ಳಗಳ ವೇದನೆ!
ಹುಟ್ಟಿಲ್ಲದ ದೋಣಿಯ ಪಯಣಿಗಳು ನಾನಾದೆನೇ?
ಕೊನೆಯಿರದೆ ಈ ನೋವಿಗೆ ಬೆಲೆಯಿರದೆ ಈ ಭಾವನೆಗಳಿಗೆ?!
ಯಾಕೆ ಮತ್ತು ಮತ್ತು ಕಾಡುತಿಹುದು,
ಬೆಂದು ನೀರಾಗಿರುವಾಗಲೂ ಹಿಂಡುತಿಹುದು!!!
ಮುಚ್ಚಿದ ಪುಟ ತೆರೆಯಲು ಮನ ಬೇಡವೆಂದರೂ
ಈ ಹೃದಯ ಕೇಳುತ್ತಿಲ್ಲ ಇಷ್ಟೆಲ್ಲ ಆದರೂ!!!
ಗೋಡೆಯ ಮೇಲಿಟ್ಟ ದೀಪದಂತಾಯಿತೇ ಜೀವನ!??
ಹೇಗೆ ಕಾಪಾಡಲಿ ಹೊತ್ತು ಉರಿಯುತಿಹುದು ಕಾನನ!!!!
ಕಿಚ್ಚು ಹಚ್ಚಿಟ್ಟ ಜೀವನ ಮತ್ತೆ ಬಂದಿಹುದು ನನ್ನ ಅರಸುತ್ತ!!
ನೀರ ಹಾಕಿ ಪ್ರಯತ್ನಿಸುತಿಹುದು ಆರಿಸಲು ಅತ್ತಿತ್ತ!!!
ಉರಿದು ಉರಿದು ಇದ್ದಿಲಾದ ಜೀವನ
ಮುಗಿಸದೆ ವಿಧಿಯಿಲ್ಲ ಈ ಕವನ!!!
ಸಾಗುತಿಹುದು ಕೊನೆಯಿರದ ಪಯಣ!
ಎಂದು ಹಾಡುವುದೊ ನನ್ನ ಬಾಳ ಕಾಜಾಣ!!!!???
ಇಂತೀ ನಿನ್ನ. ಪ್ರೀತಿಯ
ಅಶು !!!!!!!