Tuesday, July 14, 2015

ಕೊನೆಯ ಪುಟ!!!!!!!

ಕಾರ್ಮೋಡ ಕವಿದು ಮರೆಯಾದ ಸೂರ್ಯ ಮುಗುಳ್ನಕ್ಕಂತೆ!!!
ಕಲ್ಲಾದ ಹೂವು ಮತ್ತೆ ಪರಿಮಳ ಚಿಮ್ಮಿದಂತೆ!!
ನನ್ನ ನಾ ಕಳೆದುಕೊಳ್ಳುವ ಸೂಚನೆಯಂತೆ!
ಭಯ ಹೊತ್ತು ತರುತಿದೆ ಜೀವನದ ಸಂತೆ!!!!
ಅನುಭವಗಳ ಕಾಲ್ನಡಿಗೆಯಲ್ಲಿ ಕಳ್ಳು ಮುಳ್ಳಗಳ ವೇದನೆ!
ಹುಟ್ಟಿಲ್ಲದ ದೋಣಿಯ ಪಯಣಿಗಳು ನಾನಾದೆನೇ?
ಕೊನೆಯಿರದೆ ಈ ನೋವಿಗೆ ಬೆಲೆಯಿರದೆ ಈ ಭಾವನೆಗಳಿಗೆ?!
ಯಾಕೆ ಮತ್ತು ಮತ್ತು ಕಾಡುತಿಹುದು,
ಬೆಂದು ನೀರಾಗಿರುವಾಗಲೂ ಹಿಂಡುತಿಹುದು!!!
ಮುಚ್ಚಿದ ಪುಟ ತೆರೆಯಲು ಮನ ಬೇಡವೆಂದರೂ
ಈ ಹೃದಯ ಕೇಳುತ್ತಿಲ್ಲ ಇಷ್ಟೆಲ್ಲ ಆದರೂ!!!
ಗೋಡೆಯ ಮೇಲಿಟ್ಟ ದೀಪದಂತಾಯಿತೇ ಜೀವನ!??
ಹೇಗೆ ಕಾಪಾಡಲಿ ಹೊತ್ತು ಉರಿಯುತಿಹುದು ಕಾನನ!!!!
ಕಿಚ್ಚು ಹಚ್ಚಿಟ್ಟ ಜೀವನ ಮತ್ತೆ ಬಂದಿಹುದು ನನ್ನ ಅರಸುತ್ತ!!
ನೀರ ಹಾಕಿ ಪ್ರಯತ್ನಿಸುತಿಹುದು ಆರಿಸಲು ಅತ್ತಿತ್ತ!!!
ಉರಿದು ಉರಿದು ಇದ್ದಿಲಾದ ಜೀವನ
ಮುಗಿಸದೆ ವಿಧಿಯಿಲ್ಲ ಈ ಕವನ!!!
ಸಾಗುತಿಹುದು ಕೊನೆಯಿರದ ಪಯಣ!
ಎಂದು ಹಾಡುವುದೊ ನನ್ನ ಬಾಳ ಕಾಜಾಣ!!!!???
ಇಂತೀ ನಿನ್ನ. ಪ್ರೀತಿಯ
ಅಶು !!!!!!!

No comments:

Post a Comment