Thursday, June 11, 2015

"ಅಂತರಾಳದ ಅಂತರಂಗ"


ತುಟಿಯಂಚಿನಲಿ ನಗೆಯ ಬೀರಿ
ಕಣ್ಣಂಚಿನಲಿ ಸನ್ನೆ ಮಾಡಿ
ನನ್ನೀ ಮನದ ಅಂಚಿನಲಿ
ಆಸೆಯ ಹೂ ಅರಳುವಂತೆ ಮಾಡಿದೆ!!
ಆ ಹೂವಿನ ಮನಸಿಗೆ ನಾ ಸೋತು
ಒಪ್ಪಿಗೆ ಸೂಚಿಸಿದೆ ಮನದಾಸೆಯಂತೆ
ತಿಳಿದಿದ್ದರೂ ಆ ವಿಧಿಯ ಬಗ್ಗೆ
ಮನಸ್ಸು ಕೇಳಲಿಲ್ಲವಲ್ಲ ಗೆಳೆಯಾ!!
ನಿನ್ನ ಮಾತಿನ ಮೋಡಿಗೆ ಮರುಳಾಗಿ
ಸೋತು ನಾನು,ಕಳಕೊಂಡೆ ನನ್ನ ಮನಸ್ಸ ನಿನ್ನಲ್ಲಿ
ಇನಿಯಾ,ಹುಡುಕುತಿರುವೆ ಆ ಮನಸ್ಸ ಈಗ ಎಲ್ಲೆಲ್ಲಿ!!!
ತಿಳಿದಿದ್ದೆ ಮುಖ ಮನಸಿನ ಕನ್ನಡಿಯೆಂದು
ಅರಿಯದೆ ಹೋದೆನೇ ನಿನ್ನ ಮನಸ್ಸು ಬರಿ
ಕಲ್ಮಶದ ಮುಖವಾಡವೆಂದು!!!
ತಿಳಿದೂ ಏಕೆ ನಡೆದೆ ತಪ್ಪು ಹಾದಿಗಳಲ್ಲಿ
ಮರೆತೆಯಾ ತಾಳ್ಮೆಯೇ ಜೀವನ
ಈ ಬಾಳ ನೌಕೆಯಲಿ!!!
ನೀನೇಕೆ ತಿಳಿಯಲಿಲ್ಲ ಮುಷ್ಠಿಯಲ್ಲಿಹುದು ಭವಿಷ್ಯ
ಬಳುವಳಿಯಾಗಿ ನೀಡಲೇನು ನನ್ನ ಆಯುಷ್ಯ!
ಕಾರಣ,ಮನ ನಿನ್ನ ಬಯಸುತಿದೆ ಅನಾವಶ್ಯ!!!
ಏನು ಹೇಳಲಿ ಈ ಹಾಳು ಮನಸಿಗೆ
ಒಂದೇ ಹೇಳುತಿಹುದು
ಕಾಯುತಿರು ಹೀಗೆ,ಜೀವನ ಕೊನೆವರೆಗೆ!!!
ಕಾದಿರುವೆ ಗೆಳೆಯ ನಿನಗಾಗಿ ತವಕದಲಿ
ಮನದ ದುಃಖವ ಕಲ್ಲಾಗಿಸಿ ಆಸೆಯಲಿ!
ನಿನಗಾಗಿ ಕಾಯುತಿರುವೆ ನಾನಿನಲ್ಲಿ
ಬಾರದೆ ನೆನಪು ನಿನಗಲ್ಲಿ!!
ಕನಸಿನ ಕುವರನ ಆಗಮನಕಾಗಿ
ನಿನ್ನ ಪಟ್ಟದರಸಿಯಾಗುವ ಉತ್ಸಾಹದಲಿ!!
ಕಾಯುತಿರುವೆ ನಿನಗಾಗಿ
ಉಸಿರಾಡುವ ಶವದಂತೆ!!!!!!!!
ಇಂತಿ ನಿನ್ನ ಪೀತಿಯ
ಅಶು!!!!!!

No comments:

Post a Comment