Thursday, June 11, 2015

ವಿಧಿಯೆಂಬ ಕ್ರೂರಿ ಬೆನ್ನೇರಿದಾಗ!!

ಸ್ಪಂದನೆ ಇಲ್ಲದ ಬಾಳದು
ಬಳಲಿ ಬೆಂಡಾದ ಜೀವವದು
ಕಾದಿತ್ತು ನೆಮ್ಮದಿಗಾಗಿ
ಆಸೆಯ ಕೊರಳ ಎತ್ತಿ!!
ಕಾಡಿತ್ತು ಭಯವು ಭವಿಷ್ಯದ ಬಗ್ಗೆ
ಚಿಂತಿಸುತ್ತ ವರ್ತಮಾನದ ಕುರಿತು
ಆಸರೆಯ ಹಂಬಲಿಸುತ,ವಿಧಿಯಾಟಕ್ಕೆ ಸೋತಾಗ
ಕೋಲ್ಮಿಂಚಿನಂತೆ ಗೆಳೆಯನ ಆಗಮನ
ಮನದಲ್ಲಿ ಭಯದ ವಾತಾವರಣ
ಆದರೂ ಗೆಲ್ಲುವೆನೆಂಬ ಛಲ
ಕಾಯುತ್ತಿತ್ತು ಬಳ್ಳಿ ಮರದ ಆಸರೆಗಾಗಿ
ಬಿಗಿದಪ್ಪಲು ಇನಿಯನ ಬೆಚ್ಚನೆಯ ಸ್ಪರ್ಶಕ್ಕಾಗಿ
ಒಲವಿನ ಗೆಳೆಯನ ಮೆಚ್ಚಿನ ಸಂಗಾತಿ
ಇವರೀರ್ವರ ಜೀವನ,ಪ್ರೀತಿಯೆ ಇದರ ಅನುಭೂತಿ
ಗೆಳೆಯನ ಪ್ರಣಯದ ಸುಖದಲ್ಲಿ ಮೈ ಮರೆತಿದ್ದ ಆ ದಿನಗಳು
ಕಾದಿದ್ದಳು ಈ ರಾಧೆ ತನ್ನ ಕೃಷ್ಣನ ಆಗಮನಕ್ಕಾಗಿ ಆ ಸಂಜೆ
ಬಿಡುವಾಗಿತ್ತು ವಿಧಿಗೆ,ಅವರ ಕಾಣಲು ಆ ಕ್ಷಣ
ಸದ್ದಿಲ್ಲದೆ ನಿಂತಿತ್ತು ಇನಿಯನ ಎದೆಬಡಿತ
ಕಾಯದೆ ಅಂದು ತನ್ನ ಸಖಿಗಾಗಿ!
ಕಾರಣ?
ಆಕಸ್ಮಿಕ, ಅದರಲ್ಲೂ ಆ ಪಾಪಿ ವಿಧಿಯ ಕೈಚಳಕ!
ಕಾದಿದ್ದಳು ರಾಧೆ ತವಕದಲಿ ತನ್ನ ಮುರಳಿಗಾಗಿ
ಬಂದಿದ್ದ ಗೆಳೆಯ ಅಂದು ಅವನು ಶವವಾಗಿ!!
ದಿಗ್ಭ್ರಂಧಳಾದಳು ರಾಧೆ,ತನ್ನ ಇನಿಯನ ಮೌನಕೆ
ಹುಚ್ಚಿಯಂತೆ ನಗುತ,ಮುತ್ತನೀಯುತ ಆ ಮೌನದ ಮೊಗಕೆ
ತುಸು ಮೌನ,ತುಸು ನಗು ನಂಬಲಾರದೆ ವಾಸ್ತವದ ಸತ್ಯವನು
ಮರೆಯಲಾಗುತ್ತಿಲ್ಲ ಆ ಕಲ್ಪನಾ ಲೋಕದ ಪ್ರೇಮದ ನೀತಿಯನು
ತನ್ನಪ್ಪಿಕೊಳ್ಳುವ ಆ ಕೈಗಳ ಬರಸೆಳೆದು
ಕಣ್ಣೀರಧಾರೆಯ ತಡೆಯಲಾರದೆ
ನೋವ ಬಚ್ಚಿಡಲಾರದೆ...
ಶಪಿಸುತ್ತ ಆ ದೇವರ,ಇನ್ನೂ ಹೊರಬಾರದೆ ಆ ಲೋಕದಿಂದ
ತಾನಿದ್ದ ಆ ಕಲ್ಪನಾ ತಾಣದಿಂದ,ಇನಿಯನಿರುವನೆಂಬ ನಂಬಿಕೆಯಿಂದ!!
ಮತ್ತೂ ಕಾಯುತಿಹಳು ಆಸೆಯಲಿ..
ಅದೇ ದ್ವಾಪರಯುಗದ ರಾಧೆಯಂತೆ!!
ಇಂತಿ ನಿನ್ನ ಪ್ರೀತಿಯ
ಅಶು*****

No comments:

Post a Comment